ಅಪ್ಪಂಗೆ ಬೇಕು ಹೆಂಗ್ಸು; ಮಗಂಗೆ ಬೇಕು ಡ್ರಿಂಕ್ಸು, ಡ್ರಗ್ಸು

ಮಡಿವಂತ ಆರೆಸೆಸ್ಸು ಮುಂದಾಳುಗಳ ಮೂಗುಬೊಟ್ಟಿನ ಪ್ರಕರಣಗಳಂತೂ ಕಂಡೊ ಕಾಣದಂತೆ ಆಗಾಗ ಸ್ಫೋಟಗೊಂಡು ಸ್ತಬ್ಧವಾಗೋದು ಮಾಮೂಲಿ ವಿಷಯಬಿಡ್ರಿ. ಶ್ರೀರಾಮಚಂದ್ರನ ಡೂಪ್ಲಿಕೇಟ್ ಎಂದೇ ಹೆಸರಾದ ವಾಜಪೇಯಿಯೇ ನಾನು ಬಹ್ಮಚಾರಿ ಅಲ್ಲಃ ಅವಿವಾಹಿತ ಎಂದು ಬೋಲ್ಡ್ ಆಗಿ ಹೇಳಿದ್ದು ಹೆಂಗಸೊಬ್ಬಳ ಜೊತೆ ಬೇನಾಮಿಯಾಗಿ ಹನಿಮೂನ್ ಮಾಡೋದು ಓಲ್ಡ್ ನ್ಯೂಸು. ಸೆಂಟ್ರಲ್ ಪ್ರಧಾನ ಕಾರ್ಯದರ್ಶಿ ಸಂಜಯ ಜೋಶಿಯ ಸೆಕ್ಸ್ ಸಿಡಿ ರಿಲೀಸ್ ಆಗಿದ್ದೂ ಓಲ್ಡ್ ಮ್ಯಾಟರ್ರೆ. ಪಾರ್ಟಿಯಿಂದ ಹೊರ ದಬ್ಬಿಸಿಕೊಂಡ ಖುರಾನಾ ಕುರುವಿನ ನೋವು ತಾಳಲಾರದೆ ಬಿಜೆಪಿ ನಾಯಕರ ಇಂಥ ಅನೇಕ ಸೆಕ್ಸ್ ಸಿಡಿಗಳನ್ನು ಸಮಯ ಬಂದಾಗ ಗ್ರಾಂಡ್ ಆಗಿ ರಿಲೀಸ್ ಇಟ್ಕೊಂತೀನಿ ಅಂತ ಕಿಡಿಕಾರ್ಲಿಕತ್ತಾನ್ರಿ. ಎಲ್ಲಾ ಪೋಲಿಟಿಶಿಯನ್ನುಗಳಿಗೂ ಹೆಂಗಸರ ಚಟ ಸಾಮಾನ್ಯ ಬಿಡ್ರಿ. ಅದೇನ್ ದೊಡ್ಡ ಕ್ರೈಮಾ? ಅದು ಕಾಂಗ್ರೆಸ್, ಜೆಡಿ‌ಎಸ್ ನಂತ ಅದ್ನಾಡಿ ಪಾರ್ಟಗಳವರಿಗಾದ್ರೆ ಸರಿ. ಅದರೆ ಬಿಜೆಪಿಯಂತಹುದು ಶ್ರೀರಾಮನಂಗೆ ಏಕಪತ್ನಿ ವತ್ರಸ್ಥರ ಮಾಡಲ್ ಅಲ್ಲವೆ. ಅಂಥ ಪಾರ್ಟಿಯಲ್ಲದ್ದೂ ಸೆರಗಿನ ಮೊರೆ ಹೋಗೋದು ಅಂದ್ರೆ ರಾಮನ ಮರ್ವಾದೆಗೇ ಬಿತ್ತಲ್ರಿ ಕಲ್ಲು. ಹಳ್ಳ ಹಿಡಿಯೋ ಸ್ಥಿತಿಗೆ ಪಕ್ಷ ಬಂತು ಅಂಬೋದ್ಕೆ ಇನ್ನೇನು ಬೇಕ್ರಿ ಸಿಗ್ನಲ್ಲು. ಇದೆಲ್ಲಾ ಯಾಕೆ ಹೇಳ್ತ ಹೊಂಟೀನಂದ್ರೆ ಅದೇರಿ ಪ್ರಮೋದ ಮಹಾಜನನೆಂಬ ಶೃಂಗಾರರಾಜನಿಗೆ ವಾಜಪೇಯಿ ಕೊಟ್ಟ ಟೈಟ್ಲು ಲಕ್ಷ್ಮಣ. ರಾಮಾಯಣದ ತ್ಯಾಗಿ ಲಕ್ಷ್ಮಣನೆಲ್ಲಿ? ಬಿಜೆಪಿಯ ಈ ಲಕ್ಷ್ಮಣನೆಲ್ಲಿ? ಎತ್ತಣಿಂದೆತ್ತ ಸಂಬಂಧವಯ್ಯ! ಶ್ರೀರಾಮ ವನವಾಸ ಹೊಂಟಾಗ ಲಕ್ಷ್ಮಣ ಮದುವೆಯಾಗಿಯೂ ಬ್ರಹ್ಮಚಾರಿ ಅನ್ನೋಂಗೆ ಹೆಂಡ್ತಿನಾ ಊರ್ನಾಗೇ ಬಿಟ್ಟು ಕಾಡಿಗೆ ಹೊಂಟ ಕಚ್ಚೆಭದ್ರ ಇರೋ ಮನುಷ್ಯ. ಈ ಪ್ರಮೋದ ಮಾಜನನೋ ಹೆಂಗಸರ ವಿಚಾರ್ದಾಗ ಶುದ್ಧ ಅವಲಕ್ಷಣ. ಐವತ್ತೈದ್ನೇ ವಯಸ್ಸಿನಾಗೇ ರಾಷ್ಟ್ರನಾಯಕರ ಹೈಟಿಗೆ ಬೆಳ್ದು ಮುಂದಿನ ಪ್ರಧಾನಿ ಅಂತ್ಲೆ ಐಡೆಂಟಿಟಿ ಪಡ್ದು ಅಡ್ವಾಣಿ ಹೊಟ್ಟೆ ಉರಿಗೆ ಕಾರಣನಾದ ಪ್ರಮೋದ್ ತನ್ನ ತಮ್ಮ ಪ್ರವೀಣನನ್ನು ತಿರಸ್ಕರಿಸಿ ಪ್ರೀತಿ ತೋರದೆ ತಮ್ಮನ ಹೆಂಡ್ರು ಸಾರಂಗಿಯನ್ನೇ ತನ್ನ ಪ್ರಾಪರ್ಟಿ ಮಾಡ್ಕೊಂಡು ಪ್ರಾಪರ್ಟಿನೆಲ್ಲಾ ಆಕಿ ಹೆಸರಿಗೇ ಟ್ರಾನ್ಸ್ಫಫರ್ ಮಾಡಿದ್ರೆ ಅಸಲಿ ಪ್ರಾಪರ್ಟಿದಾರ ಪ್ರವೀಣಂಗೆ ಪಾಪ ಹೆಂಗಾಗಬೇಡ? ಪ್ರಮೋದನಿಗೆ ಮೂಗುಬೊಟ್ಟುಗಳೆಂದರೆ ಪ್ರಾಣ. ಕಾರ್ಪೋರೇಟರ್ ಕೆಲಸಗಾತಿ ನಿಕ್ಕಿ ಅಂಬೋಳ ಜೊತೆ ಕಳ್ಳತನ್ದಾಗೆ ನಿಖಾ, ಶ್ವೇತಾ ಅಂಬೋಳ ಜೊತೆ ಸರಸಾಟ. ಶ್ವೇತಾ ತನ್ನ ಡಾಟರ್ ಎಂದೇ ಗಾರ್ಡಿಯನ್ ತರಾ ಪೋಜ್ ಕೊಡಲಿಕತ್ತಿದ್ದ ಮಾಜನ್ಗೆ ಅನ್ ಅಕೌಂಟ್ನಾಗೆ ಇಂಥೋರು ಸಖತ್ ಮಂದಿ ಇದ್ದರು ಬಿಡ್ರಿ.

ಒಂದು ಹೆಣ್ಣಿನ ಮೇಲೆ ಕಣ್ಣು ಮಡಗಿದ ಟೆನ್ ರಾವಣನಂತ ಅಸುರನೇ ಇದ್ದ ಟೆನ್ ಹೆಡ್ನಲ್ಲಿ ಒಂದು ಹೆಡ್ಡು ಉಳಿಸ್ಕೈಣ್ದೆ ಡೆಡ್ ಆದ. ಹೆಣ್ಣಿನ ಗೀಳು ಹಚ್ಕೊಂಡು ಕೀಚಕ ಹೆಡ್ ಕುಕ್ ಭೀಮನ ಕೈಗೆ ಸಿಕ್ಕಾಗ ಪ್ರಶರ್ ಕುಕ್ಕರ್ ನಾಗಿಟ್ಟು ಭೀಮ ಅವನ್ನ ಬಾಯಲ್ ಮಾಡ್ದ. ದ್ರೌಪದಿ ಸೀರೆ ಸೆಳೆಸಿದ ಕಮಿಟ್ಮೆಂಟ್ನಿಂದಾಗೇ ದುರ್ಯೋಧನನೆಂಬ ದನ ತೊಡೆ ಮುರಿಸ್ಕೊಂಡು ನೆಗ್ದು ಬಿದ್ದ. ದೇವತೆಗಳ ಚೀಪು ದೇವೇಂದ್ರ ಸಿಪ್ಲಿಸ್ ರೋಗ ಅರ್ಥಾತ್ ಸಹಸ್ರಾಕ್ಷ ರೋಗಕ್ಕೆ ತುತ್ತಾದ ದೊಡ್ಡ ವುಮನೈಸರ್. ವಿಶ್ವಾಮಿತ್ರನೆಂಬ ಮಾಮುನಿ ಮೇನಕೆ ಎಂಬ ಮೂಗುತಿಗೆ ಮುಳ್ಳಾಗಿ ತನ್ನ ಶಕ್ತಿಯನ್ನೆಲ್ಲಾ ಕಳ್ಕೊಂಡು ನಿಶಕ್ತನಾಗಿ ಮೇನಕೆ ಕೈಗೊಂದು ಬೇಬಿ ಕೊಟ್ಟು, ಇರ್ರೆಸ್ಪಾನ್ಸಿಬಲ್ ಫಾದರ್ ಅನಿಸಿಕೊಂಡ. ಬೆಳಕು ಕೊಡೋ ಚಂದ್ರನೇ ಪಂಚ ಮಾ ಪತಿವ್ರತೆ ಲಿಸ್ಟ್ನಾಗೆ ಬರೋ ತಾರೆಳೊಂದಿಗೆ ಬೆರ್ಕಿತನ ಮಾಡಿ ಶಾಪಕ್ಕೆ ಗುರಿಯಾಗಿ ಟಿಬಿ ಡಿಸಿಸ್ಗೆ ತುತ್ತಾದ. ಹೇಳ್ತಾ ಹೊಂಟ್ರೆ ಬಯಲಾಗದ ದೊಡ್ಡವರ ಇನ್ ಡೀಸೆಂಟ್ ಇನ್ನಿಡೆಂಟ್ಸು ಭಾಳೋಟವೆ ಕಣ್ರಿ. ಹಂಗೆ ಮಾಜನ್ ಮಹಿಳೆಯರ ಫ್ರೆಂಡ್ಶಿಪ್ಪಿಗೆ ಬಿದ್ದಿದ್ದರಿಂದ್ಲೇ ಖಾಸಾ ತಮ್ಮನಿಂದಲೆ ಗುಂಡೇಟು ತಿಂದು ಸಿವಾ ಅಂದ. ಹೆಣ್ಣು ಮಾಯಿ ಗಂಡು ನಾಯಿ ಅಂದವ್ರೆ ದಾಸರು. ಮಾಜನ್ ಮರಣಕ್ಕೆ ಆವಯ್ಯನಿಗಿದ್ದ ಹೆಂಗಸರ ಮ್ಯಾಗಿನ ಮೊಬತ್ತೇ ಅಂತ ಗುಲ್ಲಾದಾಗ ಡಲ್ಲಾದದ್ದು ಬಿಜೆಪಿ ಮುದುಕರೇ. ಮರ್ಡರರ್ ಪ್ರವೀಣನಿಂದ್ಲೇ ಫೋಲೀಸರ ಮೂಲಕ ಹೇಳಿಕೆನೇ ತಿರುಚಿದರು. ಪ್ರವೀಣ್ ಮೆಂಟಲ್ ಕೇಸು ಮತಿಗೆಟ್ಟು ಶೂಟ್ ಮಾಡವ್ನೆ ಅಂತ ಎಕ್ಸಿಬೀಟ್ ಮಾಡಿಯೇ ಮಾನ ಉಳಿಸಿಕೊಂಬೋ ನಾಟ್ಕ ಮಾಡಿದರು. ಅದು ತಣ್ಣಗಾಗೋದ್ರಾಗೆ ಪ್ರಮೋದನ ಮಗ ರಾಹುಲ್ಮಾಜನ್ ಬಿಜೆಪಿಗೆ ರಾಹು ಬಡಿಯೋ ಹಂಗೆ ಮಾಡಿದ್ನೆ! ಅಪ್ಪ ಸತ್ತು ಮಾನ ಉಳಿಸಿದ್ರೆ ಮಗ ಬದುಕಿ ಆರೆಸೆಸ್ಸಿನ ಕೀರ್ತಯನ್ನೆಲ್ಲ ಅರ್ಧ ಸಾಯಿಸಿದ ಖೋಡಿ. ಅಪ್ಪನ ಚಿತಾಭಸ್ಮಂವಾ ಬ್ರಹ್ಮ ಪುತ್ರ ನದೀಗೆ ತೇಲಿಬಿಡೋ ಪ್ರೋಗ್ರಾಂ ಮಧ್ಯೆ ಅಪ್ಪನ ಡಿಪ್ರೆಷನ್ ತಾಳಲಾಗದೆ ಗ್ರಾಂಡ್ ಪಾರ್ಟಿ ಇಟ್ಕಂಡು ವಿವೇಕ್ ಮೊಯಿತ್ರ, ಕರಣ್ ಸಾಹಿಲ್ ಎಲ್ಲಾರ ಜೊತೆ ಸೇರ್ಕೋಂಡು ಶಾಂಪೇನ್ ಬಾಟ್ಲಿ ಖಾಲಿ ಮಾಡಿದ್ರೂ ‘ಕಿಕ್’ ಸಿಗದೆ ಹೋದಾಗ ೧೫೦೦೦ ಉಪಾಯಿನಷ್ಟು ಕೂಕೇನ್ ತರಿಸ್ಕೊಂಡು ಅದನ್ನ ೫೦೦ ರ ನೋಟಿನಾಗೆ ಹಾಕಿ ಸುರುಳಿ ಸುತ್ತಿ ಜುರ್ಕಿ ಎಳೆದು ಗ್ಯಾನ್ಗೆಟ್ಟು ಬಿದ್ದೋದ. ಸೆಕ್ರೆಟರಿ ವಿವೇಕ ಸಿವನ ಪಾದಾರವಿಂದ ಸೇರ್ಕಂಡ. ಅಪ್ಪ ಸತ್ತು ತಿಂಗಳಾಗಿಲ್ಲ ಮನೇರ ಗತಿ ಏನಾಗಬ್ಯಾಡ? ಬಿಜೆಪಿ ಮುದುಕರ ಸ್ಥಿತಿ ಹೆಂಗಾಗಬ್ಯಾಡ? ಯಾರೋ ವಿಷ ಹಾಕ್ಯಾರೆ ಅಂತ ಸುದ್ದಿ ಮಾಡಿದರು. ಆತ್ಮಹತ್ಯೆ ಅಂತ ನ್ಯೂಸಾತು ಉಗ್ರರ ಸಂಚು ಅಂದರಪ್ಪ. ಪ್ರವೀಣನ ಮುಗಿಯದ ಸೇಡು ಅಂತ್ಲು ಟಾಕಾತು. ಅಪೋಲೋದ ಅಡ್ನಾಡಿ ವೈದ್ಯರಿಂದ ಮನಬಂದಂತೆ ರಿಪೋರ್ಟ್ ಕೊಡಲು ಕಾಸೂ ಖರ್ಚು ಮಾಡಿದರು. ತಡವಾದರೂ ಅಸಲಿ ಸಂಗ್ತಿ ಹೊರಬಿದ್ದಾಗ ಬಿಜೆಪಿ ನಿಯತ್ತಿಗೇ ಹೊಡೆತ ಬಿತ್ತು. ಅಪ್ಪನಿಗೆ ಬೇಕು ಹೆಂಗ್ಸು ಮಗನಿಗೆ ಬೇಕು ಡ್ರಗ್ಸು ಡ್ರಿಂಕ್ಸು ಎಂದು ಟಾಂಟಾಂ ಆದಾಗ ಅಸಲಿ ಡಿಪ್ರೆಶನ್ಗೆ ಒಳಗಾದ ಮುದುಕರು, ‘ಈ ಇನ್ನಿಡೆಂಟ್ಗೂ ಪಕ್ಷಕ್ಕೂ ನೂ ರಿಲೇಷಶನ್ ಶಿಪ್ಪು. ಅದೇನಿದ್ರೂ ಮಹಾಜನ್ ಫ್ಯಾಮಿಲಿಗೆ ಸೇರಿದ ಗಾಸಿಪ್ಪು ಅಂದ್ರು.’ ವಯಸ್ನಾಗೆ ಹುಡ್ಗ ಮುಂಡೇವು ಹಿಂಗಾಡೋದು ಕುಚ್ನ ಕುಚ್ ಗಡ್ಬಡ್ ಹೋತಾ ಹಿ ಜಾತೇ ಹೈ ಅಂದ ವಾಜಪೇಯಿ ಆಂಖೆ ಬಂದ್ ಕರ್ಕೆ ತಿಪ್ಪೆ ಸಾರಿಸಿದ್ದೂ ಆತು. ಒಟ್ನಾಗೆ ಮಹಾಜನ್ ಮನೆ ಮಂದಿ ಪೊಲಿಟಿಕಲ್ ಫ್ಯೂಚರ್ನ ಷೇರು ಪೇಟೆ ಮಾರುಕಟ್ಟೆ ಕುಸಿದಿದ್ದರಿಂದ ಅಡ್ವಾಣಿ ಅಂತ ಆಕಾಂಕ್ಷಿಗಳ ಮನ ಹಗುರಾತು ಬಿಡ್ರಿ. ಬಿದ್ದೋರ ಹಿಂದಾಗಡೆ ಯಾರ್ರಿ ಇರ್ತಾರೆ? ಬಿಜೆಪಿಯಂತೂ ಆಲ್ವೇಸ್ ವಿನ್ನಿಂಗ್ ಹಾರ್ಸ್ ಹಿಂದೆಯಾ. ಬಾಲಿವುಡ್ ಕನೆಕ್ಷನ್ ಇದ್ದೂ ಸ್ಟಾರ್ ಆಗದ ಪೈಲೆಟ್ ಆಗಿಯೂ ರಾಜೀವ್‍ಗಾಂಧಿ ಹಂಗೆ ಹೈಲೈಟ್ ಆಗದ ಪಾಲಿಟಿಕ್ಟ್ ಫ್ಯಾಮಿಲಿನಾಗೇ ಹುಟ್ಟಿ ಪೊಲಿಟಿಶಿಯನ್ ಆಗದ, ಹೀರೋನಂತಿದ್ದ ರಾಹುಲ್ ಗೆ ಡ್ರಗ್ಸ್‍ನ ರಾಹು ಹೊದ್ದು ಜಿರೋ ಆಗಿ ಜೈಲು ಮುದ್ದೆ ತಿಂತಾ ನೆಲದ ಮ್ಯಾಗೆ ಮಕ್ಕಂತಾನೆ ಅಂದ್ರೆ ವೆರಿ ಸ್ಯಾಡ್. ಹಿಂಗೆ ಡ್ರಗ್ ಅಡಿಕ್ಟ್ ಆಗಿರೋ ಅದೇಟೋ ಕಾಲೇಜ್ ರೈಗಳಿಗೆ ರಾಹುಲ್ ಸ್ಟೋರಿ ಪಾಠವಾಗಬೇಕು ಅಲ್ರಾ. ವುಮನೈಸರ್ಗಳ್ನ ಡ್ರಗ್ ಅಡಿಕ್ಟಗ್ಗಳ್ನ ಪಾರ್ಟಿನಾಗೆ ಮಡಿಕ್ಕಂಡಿರೋ ಬಿಜೆಪಿ ಆರೆಸೆಸ್ಸು ವಿದ್ಯಾರ್ಥಿ ಪರಿಷತ್ನ ಪಡ್ಡೆಗಳಿಗೂ ಪಾಠವಾಗಬೇಕು ಹೌದಂತಿರೋ ಅಲ್ಲಿಂತಿರೋ?
*****
(ದಿ. ೨೯-೦೬-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುರುಷೋತ್ತಮ’ ಯಶವಂತ ಚಿತ್ತಾಲ
Next post ಅಶಾಂತ ಮನಸ್ಸುಗಳ ನಡುರಾತ್ರಿ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

cheap jordans|wholesale air max|wholesale jordans|wholesale jewelry|wholesale jerseys